Districts

KSRTC ಬಸ್‌, ಕ್ಯಾಂಟರ್‌ ಮುಖಾಮುಖಿ ಡಿಕ್ಕಿ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದಲ್ಲಿ KSRTC ಬಸ್‌ ಮತ್ತು ಕ್ಯಾಂಟರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಪುತ್ತೂರು ಘಟಕದ ಬಸ್‌ ಇಂದು ಚಿಕ್ಕಬಳ್ಳಾಪುರ ಕಡೆಯಿಂದ ಗೌರಿಬಿದನೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ಕಬ್ಬಿಣದ ರಾಡ್‌ಗಳನ್ನು ಹೊತ್ತು ಬರುತ್ತಿದ್ದ  ಕ್ಯಾಂಟರ್‌ ಡಿಕ್ಕಿ ಹೊಡೆದಿದೆ.

ಕಣಿವೆ ಪ್ರದೇಶದಲ್ಲಿ ಕವಲು ದಾರಿಯಿದ್ದು ಎಡ ಬದಿ ಚಲಿಸಬೇಕಿದ್ದ ಕ್ಯಾಂಟರ್‌ಗಾಡಿಯು ಬಲಬದಿಯಲ್ಲಿ ಬಂದಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ. ಎರಡು ವಾಹನಗಳ ಮುಂಭಾಗವು ತೀವ್ರವಾಗಿ ಜಖಂಗೊಂಡಿದೆ. ಕ್ಯಾಂಟರ್‌ನಲ್ಲಿ ಇದ್ದವರು ಮತ್ತು ಬಸ್‌ ಚಾಲಕ, ನಿರ್ವಾಹಕರೆಲ್ಲರೂ ಸೇರಿ 7-8 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share Post