Cinema

ಯಶ್‌, ಅಲ್ಲು ಅರ್ಜುನ್‌ ಹೊಗಳಿದ ಕಂಗನಾ ರಣಾವತ್

ಮುಂಬೈ : ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಸದಾ ಚರ್ಚೆಯಲ್ಲಿ ಇರುತ್ತಾರೆ. ಒಂದಿಲ್ಲೊಂದು ವಿಷಯಕ್ಕೆ ಅವರು ನೆಟ್ಟಿಗರನ್ನು ಸೆಳೆಯುತ್ತಿರುತ್ತಾರೆ. ಈಗ ಅದೇ ಕಂಗನಾ ಯಶ್‌ ಮತ್ತು ಅಲ್ಲು ಅರ್ಜುನ್‌ ಅವರನ್ನು ಹೊಗಳುವ ಮೂಲಕ ಸುದ್ದಿ ಆಗಿದ್ದಾರೆ.

ಕಂಗನಾ ರಣಾವತ್‌ ದಕ್ಷಿಣ ಭಾರತದ ಚಿತ್ರರಂಗವನ್ನು ಹಾಗೆಯೇ ಯಶ್‌ ಮತ್ತು ಅಲ್ಲು ಅರ್ಜುನ್‌ ಅವರನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ಒಂದು ಸಲಹೆಯನ್ನು ಕೊಟ್ಟಿದ್ದಾರೆ. ತಮ್ಮ ನೇರ ನುಡಿಗಳಿಗೆ ಹೆಸರುವಾಸಿಯಾಗಿರುವ ಕಂಗನಾ ಇಂದು ತಮ್ಮ ಇನ್ಸ್ಟಾ ಖಾತೆಯಲ್ಲಿ ದಕ್ಷಿಣ ಚಿತ್ರರಂಗದ ಬಗ್ಗೆ ಸ್ಟೋರಿ ಬರೆದುಕೊಂಡಿದ್ದಾರೆ.

ಇನ್ಸ್ಟಾ ಸ್ಟೋರಿಯಲ್ಲಿ ಏನಿತ್ತು :

ಹಲವು ಕಾರಣಗಳಿಂದ ದಕ್ಷಿಣ ಭಾರತದ ಸಿನಿಮಾಗಳು ಮತ್ತು ಸೂಪರ್ ಸ್ಟಾರ್ಸ್‌ಗಳು ಖ್ಯಾತಿಗಳಿಸುತ್ತಾರೆ. ‘‘ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುತ್ತಾರೆ. ಪಾಶ್ಚಾತ್ಯರಿಂದ ಪ್ರಭಾವಿತರಾಗದೇ ತಮ್ಮ ಕುಟುಂಬವನ್ನು ಹಾಗೂ ಸಂಬಂಧವನ್ನು ಪ್ರೀತಿಸುತ್ತಾರೆ. ಅವರ ವೃತ್ತಿಪರತೆಗೆ ಸರಿಸಾಟಿ ಇಲ್ಲ, ಬಾಲಿವುಡ್‌ ಶೈಲಿಯು ಇವರನ್ನು ಹಾಳು ಮಾಡದಂತೆ ಕಾಪಾಡಿಕೊಳ್ಳಬೇಕು ’’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಇತ್ತೀಚಿನ ಪುಷ್ಪ ಮತ್ತು ಕೆಜಿಎಫ್‌ ಅನ್ನು ಒಳಗೊಂಡಂತೆ ಈ ಸ್ಟೋರಿ ಹಾಕಿದ್ದಾರೆ.

Share Post