Politics

ಹೈಕಮಾಂಡ್‌ ಬಯಸಿದರೆ ಸಚಿವ ಸ್ಥಾನ ತೊರೆಯುವೆ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.‌ ಈಶ್ವರಪ್ಪ ವರಿಷ್ಠರು ಬಯಸಿದರೆ ನಾನು ಸಚಿವ ಸ್ಥಾನ ತೊರೆಯುವೆ ಎಂದು ಹೇಳಿದ್ದಾರೆ.

ಸಚಿವ ಸ್ಥಾನದಿಂದ ಕೆಳಗಿಳಿದು ಪಕ್ಷ ಸಂಘಟನೆ ಮಾಡುವುದಾಗಿ ಈಶ್ವರಪ್ಪ ಹೇಳಿದ್ದಾರೆ. ನನಗೆ ಸಚಿವ ಸ್ಥಾನಕ್ಕಿಂತ ಪಕ್ಷ ಸಂಘಟನೆಯೇ ಹೆಚ್ಚು ತೃಪ್ತಿ ನೀಡುತ್ತೆ. ನಮ್ಮದು ಶಿಸ್ತಿನ ಪಕ್ಷ, ವರಿಷ್ಠರ ಮಾತನ್ನು ನಾವು ಚಾಚೂ ತಪ್ಪದೇ ಪಾಲಿಸುತ್ತೇವೆ. ವರಿಷ್ಠರು ಹೇಳಿದ ಮೇಲೆ ನಾವು ಮಾಡಲೇಬೇಕು. ಪಕ್ಷ ನನಗೆ ಯಾವುದೇ ಕೆಲಸ ಕೊಟ್ಟರೂ ಮಾಡಲು ಸಿದ್ಧನಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.

ಇನ್ನು ನಳಿನ್‌ ಅವರ ಬಗ್ಗೆ ಕೇಳಿದ ಪ್ರಶ್ನೆಗೆ, ಅವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ರಾಜ್ಯಾಧ್ಯಕ್ಷರಾದಮೇಲೆ ನಾವು ಎಲ್ಲಾ ಚುನಾವಣೆ ಗೆಲ್ಲುತ್ತಿದ್ದೇವೆ. ಅವರನ್ನು ಬದಲಾಯಿಸುವ ಪ್ರಶ್ನೆ ಇಲ್ಲ ಎಂದು ಉತ್ತರಿಸಿದರು.

 

 

Share Post