Crime

ರಾಬರ್ಟ್‌ ನಿರ್ಮಾಪಕ ಉಮಾಪತಿಯ ಕೊಲೆಗೆ ಸಂಚು : ದರ್ಶನ್‌, ಸಂಜು ಬಂಧನ

ಬೆಂಗಳೂರು : ರಾಬರ್ಟ್‌ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಉಮಾಪತಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಈ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

2020ರಲ್ಲಿ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಹಿನ್ನೆಲೆ ನಿರ್ಮಾಪಕರ ಕೊಲೆ ಸಂಚು ನಡೆಸಿದ್ದರು ಎನ್ನಲಾದ ಹುಡುಗರನ್ನು ಮುಂಚೆಯೇ ಬಂಧಿಸಲಾಗಿತ್ತು. ಇನ್ನು ಆರೋಪಿಗಳಾದ ದರ್ಶನ್‌ ಮತ್ತು ಸಂಜು ತಲೆಮರಿಸಿಕೊಂಡಿದ್ದರು, ಅವರನ್ನು ಈಗ ಬಂಧಿಸಲಾಗಿದೆ.

ರಾಬರ್ಟ್‌, ಹೆಬ್ಬುಲಿ, ಮದಗಜ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳನ್ನು ಉಮಾಪತಿ ನಿರ್ಮಾಣ ಮಾಡಿದ್ದಾರೆ. ಅಪ್ಪು ಅವರ ಸಿನಿಮಾವನ್ನು ಕೂಡ ನಿರ್ಮಾಣ ಮಾಡಲು ಮುಂದಾಗಿದ್ದರು. ಅಪ್ಪು ಅವರಿಗೆ ಮುಂಗಡ ಹಣವನ್ನು ನೀಡಿದ್ದರು. ಅಪ್ಪು ಅವರು ಕಾಲವಾದ ಬಳಿಕ ಅಶ್ವಿನಿ ಅವರು ಆ ಹಣವನ್ನು ಹಿಂದಿರುಗಿಸಿದ್ದಾರೆ.

Share Post