National

ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟ ಗಿಫ್ಟ್‌ ಮಾಡಿದ ಭಕ್ತ

ತಿರುವನಂತಪುರಂ : ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟ ಗಿಫ್ಟ್‌ ಆಗಿ ಬಂದಿದೆ. ಭಕ್ತರೊಬ್ಬರು ಹರಕೆ ಹೊತ್ತಿದ್ದರು. ಹಾಗಾಗಿ ವಜ್ರದ ಕಿರೀಟವನ್ನು ಗಿಫ್ಟ್‌ ಮಾಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಚಿನ್ನದ ಕಿರೀಟ ಕೊಟ್ಟ ಭಕ್ತ.

ಕೇರಳದ ಹೈಕೋರ್ಟ್ವಕೀಲರೊಬ್ಬರ ನೆರವಿನಿಂದ ಶುಕ್ರವಾರ ಕಿರೀಟವನ್ನು ಶಬರಿಮಾಲೆ ದೇವಸ್ಥಾನಕ್ಕೆ ತಲುಪಿಸಿದ್ದಾರೆ. ಕಳೆದ ಮುವತ್ತು ವರ್ಷದಿಂದ ಅಯ್ಯಪ್ಪಸ್ವಾಮಿ ಭಕ್ತರಾಗಿರುವ ವೆಂಕಟಸುಬ್ಬಯ್ಯ ಕಳೆದ ವರ್ಷ ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. 15 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೆಂಕಟ ಸುಬ್ಬಯ್ಯ , ತಾನು ಬದುಕಿ ಬಂದರೆ ವಜ್ರದ ಕಿರೀಟ ಮಾಡಿಸುವುದಾಗಿ ಹರಕೆ ಹೊತ್ತಿದ್ದರು.

ಅವರು ಚೇತರಿಸಿಕೊಂಡ ಬಳಿಕ ಈಗ ಕಿರೀಟವನ್ನು ಮಾಡಿಸಿಕೊಟ್ಟಿದ್ದಾರೆ. ಅಯ್ಯಪ್ಪನ ಆಶೀರ್ವಾದದಿಂದಲೇ ನಾನು ಬದುಕುಳಿದಿದ್ದೇನೆ ಎಂದು ವೆಂಕಟ ಸುಬ್ಬಯ್ಯ ಹೇಳಿದ್ದಾರೆ.

Share Post