Politics

ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಛ ಮಾಡಿದ ಸಚಿವ

ಇಂದೋರ್‌ : ಮಧ್ಯಪ್ರದೇಶದ ಇಂದನ ಸಚಿವರ ಪ್ರದ್ಯುಮನ್‌ ಸಿಂಗ್ 30 ದಿನ ಸ್ವಚ್ಛತೆಗೆ ಪ್ರತಿಜ್ಞೆ ತೊಟ್ಟಿದ್ದಾರೆ. ಇದಕ್ಕಾಗಿ ಅವರು ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ತೀರ್ಮಾನ ಕೈಗೊಂಡಿದ್ದಾರೆ. ಇದರ ಭಾಗವಾಗಿ, ಪ್ರದ್ಯುಮನ್‌ ಸಿಂಗ್‌ ತೋಮರ್‌ ಅವರು, ಗ್ವಾಲಿಯರ್‌ನಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಅಲ್ಲಿನ ಶೌಚಾಲಯವನ್ನು ಸ್ವಚ್ಛಗೊಳಿಸಿದರು. ಈ ಮೂಲರು ಅವರು ಇತರರಿಗೆ ಮಾದರಿಯಾದರು.

ಶಾಲೆಗಳಲ್ಲಿ ಸರ್ಕಾರವೇನೋ ಶೌಚಾಲಯ ಕಟ್ಟಿಸಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಈ ಬಗ್ಗೆ ವಿದ್ಯಾರ್ಥಿನಿಯೊಬ್ಬರು ಸಚಿವರ ಮುಂದೆ ಗೋಳು ತೋಡಿಕೊಂಡಿದ್ದಳು. ಈ ಕಾರಣಕ್ಕಾಗಿ ಇಂದನ ಸಚಿವ ಪ್ರದ್ಯುಮನ್‌ ಸಿಂಗ್‌ ತೋಮರ್‌ ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ನಂತರ ಮಾತನಾಡಿದ ಪ್ರದ್ಯುಮನ್‌ ಸಿಂಗ್‌ ತೋಮರ್‌ ಅವರು, ನಾನು 30 ದಿನ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಪ್ರತಿಜ್ಞೆ ಮಾಡಿದ್ದೇನೆ. ಪ್ರತಿದಿನ ಯಾವುದಾದರೂ ಒಂದು ಸಂಸ್ಥೆಗೆ ಭೇಟಿ ನೀಡಿದ್ದ, ಅಲ್ಲನ ಶೌಚಾಲಯವನ್ನು ಶುಚಿ ಮಾಡುತ್ತೇನೆ. ಈ ಮೂಲಕ ಸ್ವಚ್ಛತೆಯ ಸಂದೇಶವನ್ನು ಎಲ್ಲರಿಗೂ ತಲುಪಿಸುತ್ತೇನೆ ಎಂದು ಹೇಳಿದ್ದಾರೆ.

 

Share Post