CinemaCrime

ನೂರಾರು ಕೋಟಿ ರೂಪಾಯಿ ಫ್ರಾಡ್‌; ತೆಲುಗಿನ ಖ್ಯಾತ ಚಿತ್ರ ನಿರ್ಮಾಪಕ ಅರೆಸ್ಟ್‌!

ಹೈದರಾಬಾದ್‌; ನೂರಾರು ಕೋಟಿ ರೂಪಾಯಿ ಫ್ರಾಡ್‌ ಮಾಡಿದ ಆರೋಪದ ಮೇಲೆ ತೆಲುಗಿನ ಖ್ಯಾತ ಚಿತ್ರ ನಿರ್ಮಾಪಕರೊಬ್ಬರನ್ನು ಹೈದರಾಬಾದ್‌ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.. ಪ್ರಿನ್ಸ್‌ ಮಹೇಶ್‌ ಬಾಬು ನಟನೆಯ ಯುವರಾಜ, ಪವನ್‌ ಕಲ್ಯಾಣ್‌ ನಟನೆಯ ತಮ್ಮುಡು, ವೆಂಕಟೇಶ್‌ ನಟನೆಯ ಪ್ರೇಮಂಟೆ ಇದೇರಾ ಸೇರಿದಂತೆ ಹಲವಾರು ಹಿಟ್‌ ಚಿತ್ರಗಳನ್ನು ನೀಡಿದ ನಿರ್ಮಾಪಕ ಬುರಗಪಲ್ಲಿ ಶಿವರಾಮ ಕೃಷ್ಣರನ್ನು ಬಂಧಿಸಲಾಗಿದೆ.. ಹೈದರಾಬಾದ್‌ನಲ್ಲಿ ಭಾರೀ ಮೊತ್ತದ ಭೂ ಅಕ್ರಮ ಮಾಡಿದ ಆರೋಪ ಇವರ ಮೇಲಿದ್ದು, ಈ ಕಾರಣದಿಂದಾಗಿ ಅವರನ್ನು ಬಂಧಿಸಲಾಗಿದೆ..
90ರ ದಶಕದಲ್ಲಿ ಶಿವರಾಮ ಕೃಷ್ಣ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು.. ತೆಲುಗಿನಲ್ಲಿ ಬಿಗ್ ಬಜೆಟ್‌ ನಿರ್ಮಾಪಕ ಎಂದೇ ಖ್ಯಾತಿ ಹೊಂದಿದ್ದರು.. ಇವರು ಈಗಿನ ತೆಲಂಗಾಣ ಸರ್ಕಾರ ಹಾಗೂ ಕೆಲ ಖಾಸಗಿ ವ್ಯಕ್ತಿಗಳಿಗೆ ಸೇರಿದ 80 ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿ ಮಾಡಿ ತಮ್ಮ ಹೆಸರಿಗೆ ಮಾಡಿಕೊಂಡಿರುವ ಆರೋಪ ಇದೆ.. ಇದರ ಈಗಿನ ಬೆಲೆ 500 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ.. 2003ರಲ್ಲಿಯೇ ಈ ಹಗರಣ ಬೆಳಕಿಗೆ ಬಂದಿದ್ದು, ಆಗಲೇ ಶಿವರಾಮ ಕೃಷ್ಣ ಅವರ ವಿರುದ್ಧ ಕೇಸ್‌ ದಾಖಲಾಗಿತ್ತು..
ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರ ನೆರವಿನಿಂದ ಚಿತ್ರ ನಿರ್ಮಾಪಕ ಶಿವರಾಮ ಕೃಷ್ಣ ಅವರು, ನಕಲಿ ದಾಖಲೆ ಸೃಷ್ಟಿ ಮಾಡಿ, ನಂತರ ಬಿಲ್ಡರ್‌ ಒಬ್ಬರ ಸಹಾಯದಿಂದ ನಿವೇಶಗಳನ್ನು ಮಾರಾಟಕ್ಕೆ ಯತ್ನಿಸಲಾಗಿತ್ತು.. ಈಗ ಬಿಲ್ಡರ್‌ ಮುರುಗ ಲಿಂಗಂ ಹಾಗೂ ನಿರ್ಮಾಪಕ ಶಿವರಾಮ ಕೃಷ್ಣರನ್ನು ಬಂಧಿಸಲಾಗಿದೆ.. ಸುಪ್ರೀಂಕೋರ್ಟ್‌ನಲ್ಲಿ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿರುವ ಕಾರಣ, ನಿರ್ಮಾಪಕನನ್ನು ಬಂಧಿಸಿ ಜೈಲಿಗಟ್ಟಲಾಗಿದೆ..

Share Post