BengaluruHealth

ಬೆಂಗಳೂರು ಲಾಡ್ಜ್‌ನಲ್ಲಿ ತೀರ್ಥಹಳ್ಳಿ ತಹಸೀಲ್ದಾರ್‌ ಅನುಮಾನಾಸ್ಪದ ಸಾವು!

ಬೆಂಗಳೂರು; ಬೆಂಗಳೂರಿನ ಮೆಜೆಸ್ಟಿಕ್‌ ಸಮೀಪದ ವೈಭವ್‌ ಲಾಡ್ಜ್‌ನಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಹಸೀಲ್ದಾರ್‌ ಜಿ.ಬಿ.ಚಿಕ್ಕನಗೌಡರ್‌ ಶವವಾಗಿ ಪತ್ತೆಯಾಗಿದ್ದಾರೆ.. ಇವರ ಸಾವು ಅನುಮಾನಾಸ್ಪದ ರೀತಿಯಲ್ಲಿದೆ.. ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ..
ಕೋರ್ಟ್‌ ಕೆಲಸದ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಚಿಕ್ಕನಗೌಡರ್‌ ಅವರು ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದರು.. ಉಪ್ಪಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ವೈಭವ್‌ ಲಾಡ್ಜ್‌ನಲ್ಲಿ ಅವರು ತಂಗಿದ್ದರು.. ಮಂಗಳವಾರ ಸಂಜೆಯಿಂದಲೂ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ.. ಮೊಬೈಲ್‌ ರಿಂಗ್‌ ಆಗುತ್ತಿದ್ದರೂ ಅವರು ಲಿಫ್ಟ್‌ ಮಾಡುತ್ತಿರಲಿಲ್ಲ.. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.. ಮೊಬೈಲ್‌ ಲೊಕೇಶನ್‌ ಪರಿಶೀಲನೆ ಮಾಡಿದಾಗ ಮೆಜೆಸ್ಟಿಕ್‌ ಸಮೀಪ ತೋರಿಸುತ್ತಿತ್ತು.. ಅದರ ಆಧಾರದ ಮೇಲೆ ವೈಭವ್‌ ಲಾಡ್ಜ್‌ನಲ್ಲಿ ನೋಡಿದಾಗ ಅವರು ಸಾವನ್ನಪ್ಪಿದ್ದರು.. ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ..
ತಹಸೀಲ್ದಾರ್‌ ಜಿ.ಬಿ.ಚಿಕ್ಕನಗೌಡರ್‌ ಅವರು ಗದಗ ಮೂಲದವರಾಗಿದ್ದು, ಸದ್ಯ ತೀರ್ಥಹಳ್ಳಿ ತಹಸೀಲ್ದಾರ್‌ ಆಗಿ ಕೆಲಸ ಮಾಡುತ್ತಿದ್ದರು.. ಸರ್ಕಾರಿ ಕೆಲಸದ ಕಾರಣದಿಂದ ಅವರು ಬೆಂಗಳೂರಿಗೆ ಬಂದಿದ್ದರು.. ಕಳೆದ ವರ್ಷದ ಅಕ್ಟೋಬರ್‌ನಲ್ಲಷ್ಟೇ ಅವರು ತೀರ್ಥಹಳ್ಳಿಗೆ ತಹಸೀಲ್ದಾರ್‌ ಬಂದಿದ್ದರು.. ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಸೂಕ್ತ ಕಾರಣ ಗೊತ್ತಾಗಲಿದೆ..

Share Post