CrimeDistricts

4 ತಿಂಗಳ ಹಿಂದಷ್ಟೇ ಮದುವೆ!; ಪತ್ನಿಯನ್ನು ಗಂಡ ಕೊಂದಿದ್ದೇಕೆ..?

ದಾವಣಗೆರೆ; ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಾಲ್ಕು ತಿಂಗಳ ಹಿಂದಷ್ಟೇ ಎರಡನೇ ಮದುವೆಯಾಗಿದ್ದ ವ್ಯಕ್ತಿ, ತನ್ನ ಎರಡನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ.. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಹಳ್ಳದಲ್ಲಿ ಮುಳುಗಿಸಿ ಈ ಕೊಲೆ ಮಾಡಲಾಗಿದೆ.. 39 ವರ್ಷದ ಗೌರಮ್ಮ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ..
ಕೆಲ ದಿನಗಳ ಹಿಂದಷ್ಟೇ ಪಾಂಡೋಮಟ್ಟಿ ಹಳ್ಳದಲ್ಲಿ ಅರೆಬೆತ್ತಲೆಯಾಗಿದ್ದ ಮಹಿಳೆಯ ಶವ ಪತ್ತೆಯಾಗಿತ್ತು.. ಸ್ಥಳೀಯರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.. ಕಾಲುಜಾರಿ ಬಿದ್ದು ಸಾವನ್ನಪ್ಪಿರಬಹುದು ಎಂದು ಎಲ್ಲರೂ ಭಾವಿಸಿದ್ದರು.. ಆದ್ರೆ, ಪೊಲೀಸರು ಇದು ಕೊಲೆಯಾಗಿರಬಹುದು ಎಂದು ಅನುಮಾನಪಟ್ಟಿದ್ದರು.. ಆ ಅನುಮಾನ ನಿಜವಾಗಿದೆ.. ಗಂಡ ಚಿದಾನಂದ ಆಚಾರ್ಯನೇ ಈ ಕೊಲೆ ಮಾಡಿದ್ದಾನೆ ಅನ್ನೋದು ಬಯಲಾಗಿದೆ..
ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಚಿದಾನಂದ ಆಚಾರ್ಯ ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ಗೌರಮ್ಮರನ್ನು ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.. ಗೌರಮ್ಮಗೆ ಕೂಡಾ ಇದು ಎರಡನೇ ಮದುವೆ ಎಂದು ಗೊತ್ತಾಗಿದೆ.. ಆದ್ರೆ ಚಿದಾನಂದಗೆ ಪರಸ್ತ್ರೀ ವ್ಯಾಮೋಹ ಹೆಚ್ಚಾಗಿತ್ತು.. ಈ ಕಾರಣಕ್ಕಾಗಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ..
ಗಂಡನ ಪರಸ್ತ್ರೀ ವ್ಯಾವೋಹದಿಂದ ಗೌರಮ್ಮ ರೋಸಿಹೋಗಿದ್ದಳು.. ಆಗಾಗ ಇದೇ ಕಾರಣಕ್ಕೆ ಜಗಳವಾಗುತ್ತಿತ್ತು.. ಇದೇ ಕಾರಣಕ್ಕೆ ಆರೋಪಿ ತನ್ನ ಹೆಂಡತಿಯನ್ನು ಹಳ್ಳದ ಬಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ..

Share Post