CrimeDistricts

ಮನೆ ಒಡತಿಯನ್ನು ಕೊಂದು ಕತೆ ಕಟ್ಟಿದ್ದಾತ ಸಿಕ್ಕಿಬಿದ್ದಿದ್ದೇ ರೋಚಕ!

ರಾಯಚೂರು; ಬಾಡಿಗೆಗಿದ್ದ ವ್ಯಕ್ತಿ ಮನೆಯ ಮಾಲೀಕಳನ್ನು ಕೊಂದು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆಂದು ಕತೆ ಕಟ್ಟಿದ್ದ ವ್ಯಕ್ತಿಯನ್ನು ಕೊನೆಗೂ ಸಿಕ್ಕಿಬಿದ್ದಿದ್ದಾನೆ.. ಕ್ಷುಲ್ಲಕ ವಿಚಾರಕ್ಕೆ ಮನೆ ಮಾಲೀಕಳನ್ನೇ ಕೊಲೆ ಮಾಡಿದ್ದ ಕಾರಣಕ್ಕಾಗಿ ಈಗ ಆರೋಪಿ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.. ರಾಯಚೂರು ನಗರದ ಉದಯನಗರದಲ್ಲಿ ಈ ಘಟನೆ ನಡೆದಿದೆ..
63 ವರ್ಷದ ಶೋಭಾ ಪಾಟೀಲ್‌ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ.. ಶೋಭಾ ಪಾಟೀಲ್‌ ಅವರಿಗೆ ಬೆಂಗಳೂರಿನಲ್ಲೂ ಮನೆ ಇದೆ.. ಹೀಗಾಗಿ ಅವರು ಬೆಂಗಳೂರಿನಲ್ಲೇ ವಾಸವಿದ್ದ ಮಹಿಳೆ, ರಾಯಚೂರಿನಲ್ಲಿರುವ ಮನೆಯಲ್ಲಿನ ಒಂದು ಭಾಗವನ್ನು ಶಿವು ಬಂಡಯ್ಯಸ್ವಾಮಿ ಎಂಬಾತನಿಗೆ ಬಾಡಿಗೆಗೆ ನೀಡಿದ್ದರು.. ಗೊತ್ತಿದ್ದವರೇ ಇರಲಿ ಎಂದು ಶಿವು ಬಂಡಯ್ಯಸ್ವಾಮಿಗೆ ಬಾಡಿಗೆಗೆ ಮನೆ ನೀಡಲಾಗಿತ್ತು.. ಆದ್ರೆ ಬಾಡಿಗೆ ವಿಚಾರದಲ್ಲಿ ಸಮಸ್ಯೆಯಾಗಿ ಇಬ್ಬರ ನಡುವೆ ಗಲಾಟೆಯಾಗಿದೆ.. ಶೋಭಾ ಪಾಟೀಲ್‌ ಅವರು ಮನೆ ಖಾಲಿ ಮಾಡು ಎಂಬು ಶಿವು ಬಂಡಯ್ಯಸ್ವಾಮಿಗೆ ತಾಕೀತು ಮಾಡಿದ್ದರು.. ಈ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ..
ಶೋಭಾ ಪಾಟೀಲ್‌ ಅವರು ಒಬ್ಬರೇ ಇದ್ದಾಗ ಮನೆಗೆ ನುಗ್ಗಿದ್ದ ಶಿವು ಬಂಡಯ್ಯಸ್ವಾಮಿ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.. ಅನಂತರ ತನ್ನಷ್ಟಕ್ಕೆ ತಾನಿದ್ದ.. ಶೋಭಾ ಪಾಟೀಲ್‌ ಅವರಿಗೆ ಹೃದಯಸಂಬಂಧಿ ಕಾಯಿಲೆಯಿದ್ದಿದ್ದರಿಂದ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು.. ಜೊತೆಗೆ ಶಿವು ಬಂಡಯ್ಯಸ್ವಾಮಿಯೇ ಶಾಸ್ತ್ರೋಕ್ತವಾಗಿ ಶೋಭಾ ಪಾಟೀಲ್‌ ಅವರ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದ..
ಆದ್ರೆ ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಶೋಭಾ ಪಾಟೀಲ್‌ ಅವರ ಸಾವಿಯ ರಹಸ್ಯ ಬಯಲಿಗೆಳೆದಿದ್ದು, ಆರೋಪಿ ಶಿವು ಬಂಡಯ್ಯಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

Share Post