CrimeDistricts

ಕಪ್ಪಗಿದ್ದೀಯ ಎಂದು ಮೂದಲಿಸಿದ ಗಂಡ; ಹೆಂಡತಿ ನೇಣಿಗೆ ಶರಣು!

ಚಿಕ್ಕಬಳ್ಳಾಪುರ; ಗಂಡ ಯಾವಾಗಲೂ ಕಪ್ಪಗಿದ್ದೀಯಾ ಎಂದು ಅವಮಾನ ಮಾಡುತ್ತಿದ್ದರಿಂದ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಈ ಘಟನೆ ನಡೆದಿದೆ.. ಏಳು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ 22 ವರ್ಷದ ಬಿಂದುಶ್ರೀ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾಳೆ.. ಮಗಳ ಆತ್ಮಹತ್ಯೆಯಿಂದ ಮನನೊಂದು ಬಿಂದುಶ್ರೀ ತಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ..
ಬಿಂದು ಶ್ರೀ ಅವರನ್ನು ರಾಘವೇಂದ್ರ ಎಂಬಾತ ಏಳು ತಿಂಗಳ ಹಿಂದೆ ಮದುವೆಯಾಗಿದ್ದ.. ರಾಘವೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಯಲ್ಲಿ ನೌಕರನಾಗಿದ್ದಾನೆ ಎಂದು ತಿಳಿದುಬಂದಿದೆ.. ಬಿಂದುಶ್ರೀಗೆ ನೀನು ಕಪ್ಪಾಗಿದ್ದೀಈಯಾ ಎಂದು ಅವಮಾನ ಮಾಡಿದ್ದಲ್ಲದೆ 20 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.. ಮದುವೆ ಸಂದರ್ಭದಲ್ಲಿ 60 ಗ್ರಾಂ ಚಿನ್ನಾಭರಣ ನೀಡಿ ಅದ್ದೂರಿಯಾಗಿಯೇ ಮದುವೆ ಮಾಡಿಕೊಡಲಾಗಿತ್ತು.. ಮೊದಲಿಗೆ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ರಾಘವೇಂದ್ರ, ಕೆಲ ದಿನಗಳಿಂದ 20 ಲಕ್ಷ ರೂಪಾಯಿ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ..
ಬಿಂದುಶ್ರೀ ಇತ್ತೀಚೆಗೆ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆಯಲೆಂದು ತವರು ಮನೆಗೆ ಬಂದಿದ್ದಳು.. ಈ ವೇಳೆ 20 ಲಕ್ಷ ರೂಪಾಯಿ ಹಣ ತರುವಂತೆ ಹೇಳಿದ್ದ ಎನ್ನಲಾಗಿದೆ.. ಆದ್ರೆ ಬಿಂದುಶ್ರೀ ಹಣ ತೆಗೆದುಕೊಂಡು ಹೋಗದೇ ಇದ್ದಾಗ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಹೇಳಲಾಗುತ್ತಿದೆ.. ಈ ಹಿನ್ನೆಲೆಯಲ್ಲಿ ಮನನೊಂದು ಬಿಂದುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ..

Share Post