CrimeDistricts

ಸಾಲಬಾಧೆ; ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ತುಮಕೂರು; ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ಮೂವರು ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಇಲ್ಲಿನ ಪಂಡಿತನಹಳ್ಳಿ ಬಳಿ ರೈಲ್ವೆ ಹಳಿ ಮೇಲೆ ಈ ದುರ್ಘಟನೆ ನಡೆದಿದ್ದು, ಮೂವರ ರುಂಡಗಳೂ ಬೇರ್ಪಟ್ಟಿವೆ.

ಮರಳೂರು ದಿನ್ನೆ ನಿವಾಸಿಗಳಾದ ಸಿದ್ದಗಂಗಯ್ಯ, ಸುನಂದಮ್ಮ ಹಾಗೂ ಗೀತಾ ಮೃತ ದುರ್ದೈವಿಗಳೆಂದು ತಿಳಿದುಬಂದಿದೆ. ಸಿದ್ದಗಂಗಯ್ಯ ಅವರು ಬೆಸ್ಕಾಂ ಉದ್ಯೋಗಿಯಾಗಿದ್ದರು. ಎರಡು ವರ್ಷದ ಹಿಂದೆ ನಿವೃತ್ತಿಯಾಗಿದ್ದಾರೆ.

ಸಾಕಷ್ಟು ಸಾಲ ಮಾಡಿಕೊಂಡಿದ್ದ ಸಿದ್ದಗಂಗಯ್ಯ ಅವರು ನಿವೃತ್ತಿಯಾದ ಮೇಲೆ ಬೆಂಗಳೂರಿನ ಕೆಸಿ ಜನರಲ್‌ ಆಸ್ಪತ್ರೆ ಬಳಿ ಟೀ ಶಾಪ್‌ ಇಟ್ಟುಕೊಂಡಿದ್ದರು. ಆದ್ರೆ ಅದೇನಾಯ್ತೋ ಏನೋ ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

Share Post