Bengaluru

ಹಾಲಶ್ರೀ ಸ್ವಾಮೀಜಿ ಬಗ್ಗೆ ಸುಳಿವು; ಖಚಿತ ಮಾಹಿತಿ ಆಧರಿಸಿ ಹೈದರಾಬಾದ್‌ಗೆ ತೆರಳಿದ ಪೊಲೀಸರು

ಬೆಂಗಳೂರು; ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚನೆ ಮಾಡಿದ ಪ್ರಕರಣ ಸಂಬಂಧ ತನಿಖೆ ತೀವ್ರವಾಗುತ್ತಿದೆ. ಪ್ರಕರಣದಲ್ಲಿ ಎಂಟು ಮಂದಿ ಭಾಗಿಯಾಗಿದ್ದು ಎ೧ ಆರೋಪಿ ಚೈತ್ರಾ ಕುಂದಾಪುರ ಸೇರಿ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಅವರು ಹೈದರಾಬಾದ್‌ನಲ್ಲಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿದೆ. ಹೀಗಾಗಿ ಸಿಸಿಬಿ ಪೊಲೀಸರು ಹೈದರಾಬಾದ್‌ಗೆ ತೆರಳಿದ್ದಾರೆ. ಇಂದು ಹಾಲಶ್ರೀ ಸ್ವಾಮೀಜಿ ಬಂಧನವಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ಚೈತ್ರಾ ವಿಚಾರಣೆಗೆ ಸಿಸಿಬಿ ಕಚೇರಿಗೆ ಬಂದಾಗ ಮಾಧ್ಯಮಗಳ ಜೊತೆ ಮಾತನಾಡಿದ್ದಳು. ಸ್ವಾಮೀಜಿ ಬಂಧನವಾದರೆ ದೊಡ್ಡ ದೊಡ್ಡವರ ಹೆಸರುಗಳೆಲ್ಲಾ ಹೊರಬರುತ್ತವೆ ಎಂದು ಹೇಳಿದ್ದಳು. ಹೀಗಾಗಿ ಸ್ವಾಮೀಜಿ ಬಂಧನವಾದರೆ, ಈ ಪ್ರಕರಣದ ಹಿಂದೆ ದೊಡ್ಡವರು ಯಾರಾದರೂ ಇದ್ದಾರಾ ಎಂಬುದರ ಬಗ್ಗೆ ಮಾಹಿತಿ ಸಿಗಲಿದೆ. ಹೀಗಾಗಿ ಸ್ವಾಮೀಜಿ ಬಂಧನ ಹಾಗೂ ಅವರ ನೀಡುವ ಹೇಳಿಕೆ ಬಗ್ಗೆ ಕುತೂಹಲ ಇದೆ.

 

Share Post