CrimeNational

ಗಗನಸಖಿಯ ಕತ್ತುಸೀಳಿದ್ದ ವ್ಯಕ್ತಿ ಜೈಲಿನಲ್ಲಿ ನೇಣಿಗೆ ಶರಣು

ಮುಂಬೈ; ತರಬೇತಿಯಲ್ಲಿದ್ದ ಏರ್‌ ಇಂಡಿಯಾ ಗಗನಸಖಿಯನ್ನು ಇತ್ತೀಚೆಗೆ ಮುಂಬೈ ಆಪಾರ್ಟ್‌ಮೆಂಟ್‌ನಲ್ಲಿ ಕೊಲೆ ಮಾಡಲಾಗಿತ್ತು. ಮನೆಗೆಲಸಗಾರನೇ ಈ ಕೊಲೆ ಮಾಡಿದ್ದ. ಇದೀಗ ಆತ ಪೊಲೀಸ್‌ ಠಾಣೆಯಲ್ಲೇ ತನ್ನ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

೨೩ ವರ್ಷದ ಗಗನಸಖಿ ರೂಪಲ್‌ ಓಗ್ರೆ ಅವರನ್ನು ಕೆಲ ದಿನಗಳ ಹಿಂದೆ ಮುಂಬೈನಲ್ಲಿ ಕೊಲೆ ಮಾಡಲಾಗಿತ್ತು. ಮನೆಗೆಲಸಗಾರ ವಿಕ್ರಮ್‌ ಅತ್ವಾಲ್‌ ಈ ಕೊಲೆ ಮಾಡಿದ್ದ. ಪೊಲೀಸರು ಕೊಲೆ ನಡೆದ ದಿನದಂದೇ ಆರೋಪಿಯನ್ನು ಅರೆಸ್ಟ್‌ ಮಾಡಿದ್ದರು. ಆತ ಈಗ ಅಂಧೇರಿ ಪೊಲೀಸ್‌ ಠಾಣೆಯ ಲಾಕಪ್‌ನಲ್ಲಿ ಪ್ಯಾಂಟ್‌ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಛತ್ತಿಸ್‌ಗಢ ಮೂಲದ ರೂಪಲ್‌ ಓಗ್ರೆಗೆ ಏಪ್ರಿಲ್‌ನಲ್ಲಿ ಏರ್‌ ಇಂಡಿಯಾದಲ್ಲಿ ಗಗನಸಖಿ ಕೆಲಸ ಸಿಕ್ಕಿತ್ತು. ಹೀಗಾಗಿ ಆಕೆ ಮುಂಬೈಗೆ ಬಂದು ಅಪಾರ್ಟ್‌ಮೆಂಟ್‌ ಒಂದರಲ್ಲಿ ಫ್ಲಾಟ್‌ ಬಾಡಿಗೆಗೆ ಪಡೆದು ವಾಸಿಸುತ್ತಿದ್ದಳು. ಗಗನಸಖಿ ಟ್ರೈನಿಂಗ್‌ನಲ್ಲಿದ್ದ ರೂಪಲ್‌ನ ಕತ್ತು ಸೀಳಿ ಕೊಲೆ ಮಾಡಲಾಗಿತ್ತು.

 

Share Post