DistrictsNational

ಇಷ್ಟವಾದ ರಸಗುಲ್ಲ ತಿನ್ನಿಸಿ ಸ್ನೇಹಿತರೇ ಮಾಡಿದರು ಮರ್ಡರ್‌

ಕೋಲ್ಕತ್ತಾ; ಸ್ನೇಹಿತನಿಗೆ ಇಷ್ಟವಾದ ರಸಗುಲ್ಲಾ ತಿನ್ನಿಸಿ ಅನಂತರ ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನಾಡಿಯಾ ಜಿಲ್ಲೆಯ ಕೃಷ್ಣನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಸಹಪಾಠಿಗಳೇ ಎಂಟನೇ ತರಗತಿ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ಬಾಲಕ ಗೆಳೆಯರನ್ನು ಭೇಟಿಯಾಗಲೆಂದು ಶುಕ್ರವಾರ ಸಂಜೆ ಸೈಕಲ್‌ನಲ್ಲಿ ತೆರಳಿದ್ದ. ಈ ವೇಳೆ ಬಾಲಕನ ಇತರ ಮೂವರು ಸಹಪಾಠಿಗಳು ಆತನನ್ನು ಕಿಡ್ನ್ಯಾಪ್‌ ಮಾಡಿದ್ದು, ಗೇಮಿಂಗ್‌ ಲ್ಯಾಪ್‌ಟಾಪ್‌ ಖರೀದಿ ಮಾಡೋದಕ್ಕೆ ಮೂರು ಲಕ್ಷ ರೂಪಾಯಿ ಕೊಡುವಂತೆ ಮೃತನ ಪೋಷಕರಿಗೆ ಬೇಡಿಕೆ ಇಟ್ಟಿದ್ದರು. ಆದ್ರೆ ಅವರ ಬೇಡಿಕೆ ಈಡೇರಿಸಲು ಆ ಕುಟುಂಬಕ್ಕೆ ಸಾಧ್ಯವಾಗಿಲ್ಲ. ಇದರಿಂದಾಗಿ ಬಾಲಕನನ್ನು ಸಹಪಾಠಿಗಳೇ ಕತ್ತು ಹಿಸುಕಿ ಕೊಂದಿದ್ದಾರೆ.

ಇದೇ ವೇಳೆ ಆರೋಪಿಗಳು ನಿನ್ನ ಕೊನೆ ಆಸೆ ಏನು ಎಂದು ಬಾಲಕನನ್ನು ಕೇಳಿದ್ದಾರೆ. ಆಗ ಆತನ ರಸಗುಲ್ಲ ಹಾಗೂ ತಂಪುಪಾನೀಯ ಇಷ್ಟ ಎಂದು ಹೇಳಿದ್ದಾರೆ. ಆರೋಪಿಗಳು ಅದನ್ನು ತೀರಿಸಿದ್ದಾರೆ. ಅನಂತರ ಆತನನ್ನು ಕೊಲೆ ಮಾಡಿ ಮೃತದೇಹವನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದಾರೆ.

ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Share Post