BengaluruPolitics

ಎಂಟಿಆರ್‌ ಹೋಟೆಲ್‌ನಲ್ಲಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಬ್ಯುಸಿ ಷೆಡ್ಯೂಲ್‌ ನಡುವೆಯೂ ಸಿಎಂ ಸಿದ್ದರಾಮಯ್ಯ ಇಂದು ಎಂಟಿಆರ್‌ ಹೋಟೆಲ್‌ಗೆ ಭೇಟಿ ನೀಡಿದ್ದರು. ಭೋಜನಪ್ರಿಯರಾಗಿರುವ ಸಿದ್ದರಾಮಯ್ಯ ಅವರು ಆಗಾಗ ತಮ್ಮಿಷ್ಟದ ಹೋಟೆಲ್‌ಗಳಿಗೆ ಹೋಗಿ ಇಷ್ಟದ ತಿಂಡಿಯನ್ನು ತಿನ್ನುತ್ತಿರುತ್ತಾರೆ. ಹಾಗೆಯೇ ಇಂದು ಎಂಟಿಆರ್‌ ಹೋಟೆಲ್‌ಗೆ ಭೇಟಿ ನೀಡಿ ದೋಸೆ ಸವಿದಿದ್ದಾರೆ.

ಇದೇ ವೇಳೆ ತೋಟಗಾರಿಕಾ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್‌, ಪರಿಷತ್‌ ಸದಸ್ಯ ವೆಂಕಟೇಶ್‌, ಶಾಸಕ ಗರುಡಾಚಾರ್‌, ರಾಜಕೀಯ ಸಲಹೆಗಾರ ಗೋವಿಂದರಾಜು ಮುಂತಾದವರಿದ್ದರು.

 

Share Post