CrimeDistrictsPolitics

ಸುಧಾಕರ್‌ ಸೋತಿದ್ದಕ್ಕೆ ಕೆರೆಗೆ ಹಾರಿ ಅಭಿಮಾನಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪರದಲ್ಲಿ ಮಾಜಿ ಸಚಿವ ಸುಧಾಕರ್‌ ಸೋತಿದ್ದಕ್ಕೆ ಮನನೊಂದು ಅಭಿಮಾನಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಡ್ರೆಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಚಿತ್ತಾರ ವೆಂಕಟೇಶ್‌ ಆತ್ಮಹತ್ಯೆ ಮಾಡಿಕೊಂಡ ಸುಧಾಕರ್‌ ಅಭಿಮಾನಿ ಎಂದು ಗುರುತಿಸಲಾಗಿದೆ.

ಚಿತ್ತಾರ ವೆಂಕಟೇಶ್‌ ಅವರು ಚಿಕ್ಕಬಳ್ಳಾಪುರ ನಗರದ ಕೋಟೆ ನಿವಾಸಿ ಎಂದು ತಿಳಿದುಬಂದಿದೆ. ವೆಂಕಟೇಶ್‌ ಅವರು ಸುಧಾಕರ್‌ ಅವರ ಕಟ್ಟಾ ಅಭಿಯಾನಿಯಾಗಿದ್ದು, ನಾಲ್ಕನೇ ಬಾರಿಯೂ ಸುಧಾಕರ್‌ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದ್ರೆ, ಚಿಕ್ಕಬಳ್ಳಾಪುರದಲ್ಲಿ ಅಚ್ಚರಿ ಫಲಿತಾಂಶ ಬಂದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಗೆದ್ದಿದ್ದಾರೆ. ಇದರಿಂದ ಮನನೊಂದು ವೆಂಕಟೇಶ್‌ ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share Post