DistrictsPolitics

ಬೊಮ್ಮಾಯಿ ಮಾಮನ್ನ ಗೆಲ್ಲಿಸಿಯೇ ಹೋಗೋದು; ಕಿಚ್ಚ ಸುದೀಪ್‌

ಶಿಗ್ಗಾಂವಿ; ಬೊಮ್ಮಾಯಿ ಮಾಮನನ್ನು ಗೆಲ್ಲಿಸಿಯೇ ಹೋಗೋದು ಎಂದು ನಟ ಕಿಚ್ಚ ಸುದೀಪ್‌ ಹೇಳಿದ್ದಾರೆ. ಇಂದು ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ನಡೆದ ರೋಡ್‌ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಸವರಾಜ ಬೊಮ್ಮಾಯಿ ಮಾಮಾ ಅವರು ಕಡಿಮೆ ಅವಧಿಯಲ್ಲೇ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ನಿಮ್ಮ ಸಪೋರ್ಟ್‌ ಇದ್ದರೆ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡೋದಕ್ಕೆ ಸಾಧ್ಯ. ಅವರು ಒಳ್ಳೆಯವರಾಗಿದ್ದರಿಂದ ನಾನು ಕ್ಯಾಂಪೇನ್‌ಗೆ ಬಂದಿದ್ದೇನೆ.ಸುಮ್ಮನೆ ಬಂದಿಲ್ಲ. ನಾನು ಬೊಮ್ಮಾಯಿ ಮಾಮನ್ನ ಗೆಲ್ಲಿಸಿಯೇ ಹೋಗುತ್ತೇನೆ ಎಂದು ಸುದೀಪ್‌ ಹೇಳಿದ್ದಾರೆ.

Share Post