DistrictsHealth

ಆರ್‌.ಧ್ರುವನಾರಾಯಣ್‌ ಪತ್ನಿ ವೀಣಾ ವಿಧಿವಶ

ಮೈಸೂರು; ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಇತ್ತೀಚೆಗಷ್ಟೇ ಹಠಾತ್‌ ನಿಧನರಾಗಿದ್ದರು. ಇದೀಗ ಮತ್ತೊಂದು ಆಘಾತ ಸುದ್ದಿ ಬಂದಿದೆ. ಧ್ರುವನಾರಾಯ ಅವರ ಪತ್ನಿ ವೀಣಾ ಕೂಡಾ ಇಹಲೋಕ ತ್ಯಜಿಸಿದ್ದಾರೆ.

ವೀಣಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಧ್ರುವನಾರಾಯಣ್‌ ಅವರು ಎರಡು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಕೆಲಸ ಮಾಡಿದ್ದಾರೆ. ಇದೀಗ ಅವರ ಪುತ್ರನಿಗೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ.

 

Share Post