DistrictsPolitics

ಈಶ್ವರಪ್ಪ ವಿರುದ್ಧ ಸ್ಪರ್ಧೆಗೆ ರೆಡಿ; ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ ಎಂದ ಆಯನೂರು

ಶಿವಮೊಗ್ಗ; ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರವಾಗಿ ಈಶ್ವರಪ್ಪ ಹಾಗೂ ಆಯನೂರು ಮಂಜುನಾಥ್‌ ವಿರುದ್ಧ ಹಲವು ದಿನಗಳಿಂದ ಜಟಾಪಟಿ ನಡೆಯುತ್ತಿತ್ತು. ಇದೀಗ ಅದು ಮತ್ತೊಂದು ತಲುಪಿದೆ. ನಾನು ಶಿವಮೊಗ್ಗದಲ್ಲಿ ಸ್ಪರ್ಧೆಗೆ ರೆಡಿ. ಇದಕ್ಕಾಗಿ ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇಂದು ಬೆಂಗಳೂರಿಗೆ ತೆರಳಿ ರಾಜೀನಾಮೆ ಕೊಡುತ್ತೇವೆ ಎಂದು ಆಯನೂರು ಮಂಜುನಾಥ್‌ ಹೇಳಿದ್ದಾರೆ.

ಶಿವಮೊಗ್ಗ ವಿಧಾಸನಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರು ತಮ್ಮ ಮಗನಿಗೆ ಟಿಕೆಟ್‌ ಕೇಳುತ್ತಿದ್ದಾರೆ. ಅವರ ಮಗ ಆದರೂ ನಿಲ್ಲಲಿ, ಅವರಾದರೂ ನಿಲ್ಲಲಿ, ಅವರ ವಿರುದ್ಧ ಸ್ಪರ್ಧೆ ಮಾಡೋದಕ್ಕೆ ನಾನು ರೆಡಿ ಎಂದು ಆಯನೂರು ಮಂಜುನಾಥ್‌ ಸವಾಲು ಹಾಕಿದ್ದಾರೆ. ನಾನು ಕೂಡಾ ಶಿವಮೊಗ್ಗದಿಂದ ಟಿಕೆಟ್‌ ಬಯಸಿ ಬಿಜೆಪಿಗೆ ಅರ್ಜಿ ಸಲ್ಲಿಸಿದ್ದೇನೆ. ಆದ್ರೆ ನನಗೆ ಟಿಕೆಟ್‌ ಕೊಡೋದು ಡೌಟು. ಈಶ್ವರಪ್ಪ ಅವರು ಜೊತೆಗೆ ಕೆಲಸ ಮಾಡಿದವರಿಗೆ ಟಿಕೆಟ್‌ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಇದೇ ವೇಳೆ ನಿಮ್ಮ ಹಣ ಎಣಿಸುವ ಮಷಿನ್‌ ಹೊರಗೆ ಬರಲಿ, ನಾನು ನಿಮ್ಮ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಸವಾಲಿನ ಘೋಷಣೆ ಮಾಡಿದರು.

Share Post