BengaluruCrime

ಶಾಸಕ ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್;‌ ಮಾಡಾಳ್‌ಗೆ ಬಂಧನದ ಭೀತಿ

ಬೆಂಗಳೂರು; ನವಲತ್ತು ಲಕ್ಷ ರೂಪಾಯಿ ಲಂಚ ಸ್ವೀಕಾರ ಪ್ರಕರಣ ಸಂಬಂಧ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಪ್ರಕರಣದಲ್ಲಿ ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ಮಾಡಾಳ್‌ ವಿರೂಪಾಕ್ಷಪ್ಪ ಎ1 ಆರೋಪಿಯಾಗಿದ್ದಾರೆ. ಅವರ ಮಗ ಮಾಡಾಳ್‌ ಪ್ರಶಾಂತ್‌ ಎ2 ಆರೋಪಿಯಾದರೆ, ಕೆಎಸ್‌ಡಿಎಲ್‌ ಅಕೌಂಟೆಂಟ್‌ ಸುರೇಂದ್ರ ಎ3 ಆರೋಪಿಯಾಗಿದ್ದಾರೆ.

ಇನ್ನು ಆರೋಮಾ ಕಂಪನಿ ಸಿಬ್ಬಂದಿ ನಲವತ್ತು ಲಕ್ಷ ಲಂಚ ನೀಡಲು ಬಂದಿದ್ದರು. ಅವರನ್ನು ಕೂಡಾ ಅರೆಸ್ಟ್‌ ಮಾಡಲಾಗಿದೆ. ಆರೋಮಾ ಕಂಪನಿ ಸಿಬ್ಬಂದಿಯಾದ ನಿಕೋಲಾ, ಆಲ್ಬರ್ಟ್‌ ಹಾಗೂ ಗಂಗಾಧರ್‌ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ. ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಅವರೇ ಈ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾರೆ. ಹೀಗಾಗಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಬಂಧನದ ಭೀತಿ ಶುರುವಾಗಿದೆ.

Share Post