CrimeDistricts

ಮೊಬೈಲ್‌ನಲ್ಲೇ ಪರ್ಸೆಂಟೇಜ್‌ ವ್ಯವಹಾರ; ಪಿಡಿಒ ಅಮಾನತು

ರಾಯಚೂರು; ಮೊಬೈಲ್‌ ಪರ್ಸೆಂಟೇಜ್‌ ವ್ಯವಹಾರ ಕುದುರಿಸಿದ್ದ ಪಂಚಾಯತ್‌ ಡೆವೆಲಪ್‌ಮೆಂಟ್‌ ಆಫೀಸರ್‌ ಒಬ್ಬರನ್ನು ಜಿಲ್ಲಾ ಪಂಚಾಯತ್‌ ಸಿಇಒ ಅಮಾನತು ಮಾಡಿದ್ದಾರೆ. ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿಯ ವಿವಿಧ ಕಾಮಗಾರಿಗಳಿಗೆ ಮೊಬೈಲ್‌ನಲ್ಲೆ ಪಿಡಿಒ ಅಮರೇಶ್‌ ತೋರಣದಿನ್ನಿ ಪರ್ಸೆಂಟೇಜ್ ವ್ಯವಹಾರ ಕುದುರಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ. 

ಪಾಮನಕಲ್ಲೂರು ಗ್ರಾಪಂ ಪಿಡಿಓ ಆಗಿದ್ದ ಅಮರೇಶ್ ತೋರಣದಿನ್ನಿ ಗ್ರಾ.ಪಂಗೆ ಪ್ರಭಾರಿ ಪಿಡಿಓ ಆಗಿಯೂ ಕೆಲಸ ಮಾಡುತ್ತಿದ್ದರು. ಎರಡೂ ಪಂಚಾಯತಿಗಳಲ್ಲೂ ಕರ್ತವ್ಯ ಲೋಪ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿರುವ ಆರೋಪ ಎದುರಿಸುತ್ತಿದ್ದರು. ಕಾಮಗಾರಿಯೊಂದಕ್ಕೆ ಸಂಬಂಧಪಟ್ಟಂತೆ ನಡುರಸ್ತೆಯಲ್ಲೇ ಮೊಬೈಲ್‌ನಲ್ಲಿ ತನ್ನ ಪರ್ಸೆಂಟೇಜ್ ಬಗ್ಗೆ ಮಾತನಾಡಿದ್ದ ವೀಡಿಯೋ ವೈರಲ್ ಆಗಿತ್ತು. ಈ ಕುರಿತು ನೀಡಿದ್ದ ಕಾರಣ ಕೇಳಿ ನೋಟಿಸ್‌ಗೆ ಅಮರೇಶ್ ಉತ್ತರಿಸಿರಲಿಲ್ಲ. ಹೀಗಾಗಿ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರಾ ಪಿಡಿಓ ಅಮರೇಶ್‌ನನ್ನ ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.

Share Post