National

ಅಗ್ನಿಪಥ್‌ ವಿರುದ್ಧ ಹೋರಾಟ; ಕಾಶಿಯಲ್ಲಿ ಮಂಡ್ಯದ ಜನ ಪರದಾಟ

ಕಾಶಿ; ಸೇನಾ ನೇಮಕಾತಿಯಲ್ಲಿ ಅಗ್ನಿಪಥ್‌ ಎಂಬ ಯೋಜನೆ ಜಾರಿ ವಿರೋಧಿಸಿ ಉತ್ತರ ಭಾರತದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಸಾವಿರಾರು ಪ್ರಯಾಣಿಕರು ಮಾರ್ಗ ಮಧ್ಯದಲ್ಲೇ ಪರದಾಡುತ್ತಿದ್ದಾರೆ. ಮಂಡ್ಯದಿಂದ 70 ಮಂದಿ ಕಾಶಿಗೆ ತೆರಳಿದ್ದು, ಅವರು ಅಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

   ಮಂಡ್ಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ 70 ಕ್ಕೂ ಅಧಿಕ ಕನ್ನಡಿಗರು ಉತ್ತರ ಭಾರತದ ಕಾಶಿ ಪ್ರವಾಸಕ್ಕೆ ತೆರಳಿದ್ದರು. ಆದ್ರೆ ಪ್ರತಿಭಟನೆಯಿಂದಾಗಿ ಕಾಶಿಯಿಂದ ಬೆಂಗಳೂರಿಗೆ ಬರುವ ರೈಲು ರದ್ದಾಗಿದೆ. ಹೀಗಾಗಿ ಪ್ರವಾಸಿಗರು ಮಂಡ್ಯಕ್ಕೆ ಬರುವುದಕ್ಕೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ, ಪ್ರವಾಸಕ್ಕೆ ಹೋಗಿದ್ದ ಗುತ್ತಲು ನಿವಾಸಿ ಮಧು ಶಿವ ಲಿಂಗಯ್ಯ ಹಾಗೂ ಸಹ ಪ್ರವಾಸಿಗರು ವಿಡಿಯೋ ಮಾಡಿ ತಮಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

Share Post