Districts

ರೈತನ ಮನೆಗೇ ಬಂದು ವಾಹನ ಡೆಲಿವರಿ ಕೊಟ್ಟ ಮಹಿಂದ್ರ ಸಿಬ್ಬಂದಿ

ತುಮಕೂರು: ಮಹೀಂದ್ರ ಶೋರೂಂನಲ್ಲಿ ರೈತನಿಗೆ ಅವಮಾನಿಸಿ ನಂತರ ಸಿಬ್ಬಂದಿ ಪೇಚಿಗೆ ಸಿಲುಕಿದ್ದು ಎಲ್ಲೆಡೆ ವೈರಲ್‌ ಆಗಿತ್ತು. ಇದೀಗ ಮಹೀಂದ್ರ ಸಂಸ್ಥೆಯ ಸಿಬ್ಬಂದಿಯೇ ರೈತನ ಮನೆಗೆ ಗೂಡ್ಸ್‌ ವಾಹನವನ್ನು ಡೆಲಿವರಿ ಮಾಡಿದೆರೈತ ಕೆಂಪೇಗೌಡನ ಮನೆಗೇ ಕಂಪನಿಯಿಂದ ವಾಹನ ಡೆಲಿವರಿ ಮಾಡಲಾಗಿದೆ. ಈ ಬಗ್ಗೆ ಆನಂದ್ ಮಹೀಂದ್ರಾ ಟ್ವೀಟ್‌ ಮಾಡಿ, ಮಹೀಂದ್ರ ಕುಟುಂಬಕ್ಕೆ ಸ್ವಾಗತ ಕೋರಿದ್ದಾರೆ.

ಕೆಂಪೇಗೌಡ ಅವರು ಹೆಬ್ಬೂರು ಹೋಬಳಿಯ ರಾಮನಪಾಳ್ಯ ಗ್ರಾಮದವರು. ಇವರು ಗೂಡ್ಸ್‌ ವಾಹನ ಖರೀದಿ ಮಾಡೋದಕ್ಕೆ ಬಂದಾಗ, ತುಮಕೂರಿನ ಮಹೀಂದ್ರ ಶೋರೂಂ ಸಿಬ್ಬಂದಿ ಅವಮಾನ ಮಾಡಿದ್ದರು. ಹೀಗಾಗಿ ರೈತ ಚಾಲೆಂಜ್‌ ಮಾಡಿ, ಕೂತಲ್ಲಿಂದಲೇ ಹತ್ತು ಲಕ್ಷ ರೂಪಾಯಿ ತರಿಸಿದ್ದರು. ವಾಹನ ಡೆಲಿವರಿ ಕೊಡುವಂತೆ ಪಟ್ಟು ಹಿಡಿದಿದ್ದರು. ಮೊದಲು ಹೇಳಿದ ಮಾತು ತಪ್ಪಿದ ಸಿಬ್ಬಂದಿ ವಾಹನ ಕೊಡಲು ಮೂರು ದಿನ ಆಗುತ್ತೆ ಎಂದು ಹೇಳಿದ್ದರು. ಈ ಸುದ್ದಿ ಭಾರಿ ವೈರಲ್‌ ಆಗಿತ್ತು.

Share Post