National

ಗಣರಾಜ್ಯೋತ್ಸವ ಪರೇಡ್‌; NCC ನೇತೃತ್ವ ಮೈಸೂರು ವಿದ್ಯಾರ್ಥಿನಿ ಹೆಗಲಿಗೆ

ಮೈಸೂರು: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದ ವೇಳೆ ನಡೆಯುವ ಪರೇಡ್‌ನಲ್ಲಿ ಮೈಸೂರಿನ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್ NCC ನೇತೃತ್ವ ವಹಿಸಲಿದ್ದಾರೆ. ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಪ್ರತಾಪ್‌ ಸಿಂಗ್‌ ಪುತ್ರಿಯಾಗಿರುವ ಪ್ರಮೀಳಾ ಕುನ್ವರ್‌, ಮಹಾರಾಣಿ ಕಾಲೇಜಿನಲ್ಲಿ ಬಿಎಸ್‌ಸಿ ವಿದ್ಯಾರ್ಥಿನಿಯಾಗಿದ್ದಾರೆ.

ವಿವಿ ಮೊಹಲ್ಲಾ ನಿವಾಸಿಯಾಗಿರುವ ಪ್ರಮೀಳಾ 2018ರ ದಸರಾ ಮೆರವಣಿಗೆಯಲ್ಲೂ NCC ನೇತೃತ್ವ ವಹಿಸಿದ್ದರು. ಈಗಾಗಲೇ ದೆಹಲಿಯಲ್ಲಿ ರಿಹರ್ಸಲ್‌ಗಳು ನಡೆಯುತ್ತಿವೆ. ವಿಜಯ್ ಚೌಕ್​ನಿಂದ ಇಂಡಿಯಾ ಗೇಟ್ ವರೆಗಿನ ರಾಜ್​ಪಥ್ ಮಾರ್ಗದಲ್ಲಿ ಪಥಸಂಚಲನ ರಿಹರ್ಸಲ್ ನಡೆಸಲಾಗುತ್ತಿದೆ.

Share Post