Bengaluru

ವೀಕೆಂಡ್‌ ಕರ್ಫ್ಯೂ ಬಗ್ಗೆ ಸಿಎಂ ನಿರ್ಧರಿಸುತ್ತಾರೆ : ಬಿ ಸಿ ನಾಗೇಶ್‌

ಬೆಂಗಳುರು : ಕೊರೊನಾ ಮೂರನೇ ಅಲೆಯನ್ನು ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಜರುಗಿಸಿತ್ತು. ಮೊದಲು ಜನವರಿ ೧೫ರವರೆಗೆ ವೀಕೆಂಡ್‌ ಕರ್ಫ್ಯೂ, ನೈಟ್‌ ಕರ್ಫ್ಯೂ ಕ್ರಮಗಳನ್ನು ಸರ್ಕಾರ ಜರುಗಿಸಿತ್ತು. ದಿನದಿಂದ ದಿನಕ್ಕೆ ಕೇಸ್‌ಗಳು ಹೆಚ್ಚುತ್ತಿರುವ ಕಾರಣ ಕೋವಿಡ್‌ ಕಠಿಣ ನಿಯಮಗಳನ್ನು ಸರ್ಕಾರ ಜನವರಿ 31ರ ವರೆಗೆ ವಿಸ್ತರಿಸಿದೆ.

ವೀಕೆಂಡ್‌ ಕರ್ಫ್ಯೂ ಮತ್ತು ನೈಟ್‌ ಕರ್ಫ್ಯೂಗಳ ವಿರುದ್ಧ ರಾಜ್ಯದ ಜನತೆ ಮತ್ತು ಕೆಲವು ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಿಜೆಪಿಯ ಕೆಲವು ನಾಯಕರು ಕೂಡ ವೀಕೆಂಡ್‌ ಮತ್ತು ನೈಟ್‌ ಕರ್ಫ್ಯೂ ಅವೈಜ್ಞಾನಿಕ ಎಂದು ಹೇಳಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ ಸಿ ನಾಗೇಶ್‌, ವೀಕೆಂಡ್‌ ಕರ್ಫ್ಯೂ ಮತ್ತು ನೈಟ್‌ ಕರ್ಫ್ಯೂ ಹಾಕಿರುವುದು ಜನರ ಒಳಿತಿಗಾಗಿ. ಅದನ್ನು ತೆರವು ಮಾಡಬೇಕೋ ಅಥವಾ ಇನ್ನಷ್ಟು ದಿನ ಜಾರಿಯಲ್ಲಿಡಬೇಕೋ ಎಂಬುದನ್ನು ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

 

Share Post